
ಕೊಪ್ಪ ತಾಲೂಕು ಕಚೇರಿ ಇತ್ತೀಚಿನ ದಿನಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿದೆ ರೈತರು ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಕಚೇರಿಗೆ ಬರುವುದು ಬರಿ ಕೈಯಲ್ಲಿ ಹೋಗುವುದೇ ದಿನಚರಿಯಾಗಿದೆ. 2021 ರಲ್ಲಿ ವಿತರಣೆಯಾದ ಹಕ್ಕು ಪತ್ರಗಳ ದಾಖಲೆಯೇ ರೆಕಾರ್ಡ್ ರೂಮಿನಿಂದ ಮಾಯವಾಗಿದೆ ಎಂದರೆ ಇನ್ನು ಹಳೆಯ ದಾಖಲೆಗಳು ಸಿಗಬಹುದೇ ಎಂಬುದನ್ನು ದಂಡಾಧಿಕಾರಿಗಳೇ ತಿಳಿಸಬೇಕಾಗುತ್ತದೆ. ಸದಾ ಜನಜಂಗುಳಿಯಲ್ಲಿ ತುಂಬಿ ತುಳುಕುತ್ತಿದ್ದ ತಾಲೂಕು ಕಚೇರಿ ಇಂದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಒಂದಿಷ್ಟು ಜನರನ್ನು ಹೊರತುಪಡಿಸಿದರೆ ಬೇರೆಲ್ಲ ಕಡೆ ಬಿಕೋ ಎನ್ನುತ್ತದೆ ಇದಕ್ಕೆ ಕಾರಣ ಕಚೇರಿಗೆ ಭೇಟಿ ಕೊಟ್ಟು ಕೆಲಸವಾಗದೆ ಬೆಸತ್ತು ತಾಲೂಕು ಕಚೇರಿಯ ಸಹವಾಸವೇ ಬೇಡ ಎಂದು ಜನಸಾಮಾನ್ಯರು ರೈತರು ಅತ್ತ ಮುಖವೇ ಹಾಕುತ್ತಿಲ್ಲ ಇದಕ್ಕೆ ಕಾರಣ ಯಾರು?

ಕೊಪ್ಪ ತಾಲೂಕಿನ ವಿಸ್ತೀರ್ಣ ಬಹುತೇಕ ನಮ್ಮ ದಂಡಾಧಿಕಾರಿಗಳಿಗೆ ತಿಳಿದಿಲ್ಲವೇನೋ ಏಕೆಂದರೆ ಕಚೇರಿಗೆ ಬರುವ ಸಾರ್ವಜನಿಕರು ಎಷ್ಟು ದೂರದಿಂದ ಬರುತ್ತಾರೆ ಎಂಬ ಅರಿವಿದ್ದರೆ (ಅದರಲ್ಲೂ ಸಾರಿಗೆ ಸಂಸ್ಥೆ ಮುಚ್ಚಿದ ನಂತರ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ) ಸ್ವಲ್ಪವಾದರೂ ಸಾರ್ವಜನಿಕರಿಗೆ ಸ್ಪಂದಿಸುವ ಕಾರ್ಯವಾಗುತ್ತಿತ್ತೇನೋ ಅವರಿಗೆ ತಿಳಿಸುವ ಗೋಜಿಗೂ ಯಾವ ಅಧಿಕಾರಿಗಳು ಮುಂದಾಗಲಿಲ್ಲವೇನು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಕೊಪ್ಪ ತಾಲೂಕಿನ ವಿಸ್ತೀರ್ಣವನ್ನು ತೆಗೆದುಕೊಂಡರೆ ತಾಲೂಕು ಕಚೇರಿಯಿಂದ ಕುದುರೆಗುಂಡಿವರೆಗೆ 6 ಕಿಲೋಮೀಟರ್, ಕೊರಡಿ ಹಿತ್ತಲು ರಸ್ತೆ ತೆಗೆದುಕೊಂಡರೆ ಬಹುತೇಕ ಮೇಲ್ ಪಾಲ್ ನಿಂದ ಈಚೆಗೆ 21 ಕಿಲೋಮಿಟರ್, ಕೊಪ್ಪದಿಂದ ಬಸರಿ ಕಟ್ಟೆ 42 ಕಿಲೋಮಿಟರ್ ಹಾಗೆಯೇ ಕೊಪ್ಪದಿಂದ ಸಿಗೋಡ್ 30 ಕಿಲೋಮಿಟರ್, ಕೊಪ್ಪದಿಂದ ಅಸಗೋಡು 15 ಕಿಲೋಮಿಟರ್, ಕೊಪ್ಪದಿಂದ ತುಮ್ಕಾನೇ 24 ಕಿಲೋಮಿಟರ್, ಕೊಪ್ಪದಿಂದ ಕಮ್ಮರಡಿ 27 ಕಿಲೋಮೀಟರ್, ಕೊಪ್ಪದಿಂದ ಗಡಿಕಲ್ 10 ಕಿಲೋಮಿಟರ್, ಕೊಪ್ಪದಿಂದ ಬೊಮ್ಲಾಪುರ 12 ಕಿಲೋಮಿಟರ್, ಕೊಪ್ಪದಿಂದ ಸಿದ್ಧರಮಠ 13 ಕಿಲೋಮೀಟರ್, ಕೊಪ್ಪದಿಂದ ಊರ್ಮಕ್ಕಿ ಅಂದಾಜು 10 ಕಿಲೋಮೀಟರ್ ( ನಮ್ಮ ಕೊಪ್ಪ ತಾಲೂಕಿನ ವ್ಯಾಪ್ತಿ ತಹಶಿಲ್ದಾರ್ ರವರ ಮಾಹಿತಿಗಾಗಿ ಇಷ್ಟೊಂದು ವಿವರಣೆ) ಎಷ್ಟೊಂದು ದೂರದಿಂದ ತಾಲೂಕು ಕಚೇರಿಗೆ ತಮಗೆ ಆಗಬೇಕಾಗಿರುವ ಕೆಲಸ ಕಾರ್ಯಗಳಿಗೆ ತಮ್ಮ ಕೆಲಸವನ್ನು ಬದಿಗೊತ್ತಿ ರಜೆ ಮಾಡಿ ಬರುವ ಸಾರ್ವಜನಿಕರಿಗೆ 1 ಬಾರಿ,2 ಬಾರಿ ಓಕೆ ಹತ್ತಾರು ಬಾರಿ ಅದೇ ರೀತಿಯ ಅಲೆದಾಟವಾದರೆ ಯಾರು ತಾಲೂಕು ಕಚೇರಿಗೆ ಮುಖ ಹಾಕುತ್ತಾರೆ.

ರೆಕಾರ್ಡ್ ರೂಂನಲ್ಲಿ ನೂರಾರು ರೆಕಾರ್ಡ್ಗಳು ಕಾಣೆಯಾಗಿವೆ ಎಂಬ ಸುದ್ದಿ ಇದೆ ಅದು ಸತ್ಯ ಕೂಡ ಏಕೆಂದರೆ ನಮ್ಮೂರ ವಾರ್ತೆ ಪತ್ರಿಕೆಗೆ ಬಂದ ಒಂದು ದೂರಿನ ಆಧಾರದಲ್ಲಿ ಪತ್ರಿಕೆಯೇ ದಾಖಲೆ ನೀಡುವಂತೆ ಅರ್ಜಿ ನೀಡಿದರೆ 2021 ರಲ್ಲಿ ಕೊಟ್ಟ ಹಕ್ಕುಪತ್ರದ ದಾಖಲೆ ಇಲ್ಲ ಹಾಗಾದರೆ ಹಿಂದಿನ ದಾಖಲೆಗಳ ಪರಿಸ್ಥಿತಿ ಏನಾಗಿರಬಹುದು? (ಈ ಸುದ್ದಿ ಪ್ರಕಟಣೆ ಯಾದ ನಂತರ ನಮಗೆ ಉತ್ತರ ಬರಬಹುದು ಹಿಂದೆ ಆದ ತಪ್ಪಿಗೆ ನಾವು ಹೊಣೆಯಾಗಬೇಕೆ?) ಆದರೆ ಅಧಿಕಾರ ಹಸ್ತಾಂತರವಾಗುವಾಗ ಪ್ರತಿಯೊಂದು ಸರಿಯಾಗಿದೆಯೇ ಎಂಬ ಮಾಹಿತಿಯನ್ನು ಪಡೆದು ದಾಖಲೆಯನ್ನು ಪಡೆದು ಅಧಿಕಾರವನ್ನು ಹಸ್ತಾಂತರಿಸಿಕೊಳ್ಳಬೇಕು ಇದೊಂದು ಸಾಮಾನ್ಯ ಜ್ಞಾನ ಅದರ ಅರಿವಿಲ್ಲದವರು ದಂಡಾಧಿಕಾರಿ ಹುದ್ದೆಯಲ್ಲಿ ಕೂರಲು…. ಡ್ಯಾಶ್ ಡ್ಯಾಶ್ ಡ್ಯಾಶ್ ಸಾರ್ವಜನಿಕರಿಗೆ ಬಿಟ್ಟಿದ್ದು. ಪ್ರತಿ ಗ್ರಾಮಕ್ಕೂ ಒಬ್ಬ ಗ್ರಾಮ ಸಹಾಯಕ ಎಂಬ ಹುದ್ದೆ ಇದೆ ಪಾಪ ಅವರು ತಮ್ಮ ಪಾಡಿಗೆ ಅವರು ತಮಗೆ ಗೊತ್ತಿರುವ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿ ಗೊಂದಲವನ್ನು ಪರಿಹರಿಸುವ ಕೆಲಸಕ್ಕೆ ಮುಂದಾದರೆ ಇದೇ ದಂಡಾಧಿಕಾರಿ ಅಮ್ಮ ಬಾಂಡ್ ನೀವೇಕೆ ಅವರಿಗೆ ಮಾಹಿತಿ ನೀಡುತ್ತೀರಿ ಎಂದು ದಬಾಯಿಸುವ ಮಟ್ಟಿಗೆ ತಮ್ಮ ಅಧಿಕಾರದ ದರ್ಪವನ್ನು ತೋರುವುದರೊಂದಿಗೆ ದಿನಕ್ಕೊಂದು ಕಾನೂನು ರೂಪಿಸುವುದರಲ್ಲೆ ಮಗ್ನರಾಗಿರುವ ಅಮ್ಮ ಬಾಂಡ್ ಕಚೇರಿಗೆ ಅಲೆದು ಅಲೆದು ಸಾಕಾದ ಹಲವು ರೈತರು ಕೆಲವು ಸ್ಥಳಿಯ ವ್ಯಕ್ತಿಗಳನ್ನು ಹಿಡಿದು ನಮಗೆ ದೂರದಿಂದ ಬರಲು ಸಾಧ್ಯವಿಲ್ಲ ದಯವಿಟ್ಟು ನಮ್ಮ ಕೆಲಸವನ್ನು ನೀವೇ ಮಾಡಿಕೊಡಿ ಎಂದು ಕೆಲವು ಕಾನೂನು ತಜ್ಞರಿಗೆ ತಮ್ಮ ಕೆಲಸವನ್ನು ಮಾಡಿಕೊಡುವಂತೆ ಗೂಗರೆದು ಒಪ್ಪಿಸಿದ ಕಾರಣ ಅವರ ಕೆಲಸವನ್ನು ಮಾಡಿಕೊಡಿ ಎಂದು ಹೋದರೆ ನೀವ್ಯಾರು ಬರಲು ಅವರೇ ಬರಬೇಕು ಎಂದು ತಾಕಿತ್ತು ಮಾಡುವ ಮೂಲಕ ರೈತರ ಹಾಗೂ ಸಾರ್ವಜನಿಕರ ಕೆಲಸ ವನ್ನು ಮಾಡಲು ಮನಸಿಲ್ಲದ ಅಧಿಕಾರಿ ಎಂದು ಸಾರ್ವಜನಿಕ ಕೆಂಗಣ್ಣಿಗೆ ಬಿದ್ದಿರುವ ದಂಡಾಧಿಕಾರಿಗಳು ತಾಲೂಕು ಕಚೇರಿಗೆ ಆವರಿಸಿಕೊಂಡಿರುವ ಪೂತನಿಯಂತೆ ಗೋಚರಿಸುತ್ತಿದ್ದಾರೆ. ನಾಲ್ಕು ಜನ ಶಿರಸ್ತೆದಾರರು ಇಲ್ಲಿಗೆ ಅವಶ್ಯಕತೆ ಇದೆಯೇ ಕೆಲಸ ಮಾಡುವವರಿಗಿಂತ ಕೆಲಸ ಮಾಡಿಸುವವರ ಸಂಖ್ಯೆ ಹೆಚ್ಚಾಗಿದ್ದು ದಂಡಾಧಿಕಾರಿಗಳ ಎಡಬಲ ಕಿವಿ ಕಚ್ಚುವ ಹಾಗೂ ಕಿವಿ ಉದುವ ಮೂರು ಮಂಗಗಳಿಂದ ತಾಲೂಕು ಆಡಳಿತದ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ ಹಾಗೂ ಈ ಬಾರಿ ನಡೆದ ಕೆಲವು ಸಮುದಾಯದ ಜಾತಿ ನಾಯಕರ ಜಯಂತಿಗೆ ಆ ಸಮುದಾಯದ ನಾಯಕರುಗಳಿಗೆ ತಿಳಿಸದೆ ಮಾಡುವ ಮೂಲಕ ಒಂದೊಂದು ಸಮುದಾಯದ ಆಚರಣೆಗೆ ಬಂದಿರುವ ಹಣ ಆಚರಣ ಸಮಿತಿಯ ಅಧಿಕಾರಿ ಲೂಟಿ ಹೊಡೆದಿದ್ದಾರೆ ಇದರ ಪಾಲು ಯಾರ್ಯಾರಿಗಿದೆಯೋ ದೇವರೇ ಬಲ್ಲ ಒಟ್ಟಾರೆ ಕೊಪ್ಪ ತಾಲೂಕು ಕಚೇರಿಯಲ್ಲಿ ಇರುವ ದಂಡಾಧಿಕಾರಿ “ದಂಡಕಷ್ಟೇ” ಎಂಬ ಸುದ್ದಿ ಸಾರ್ವಜನಿಕರು ಹಾಗೂ ರೈತರ ಮನದ ಮಾತಾಗಿದೆ.
Leave a Reply