
ಬಾಳೆಹೊನ್ನೂರಿನ ಇಕ್ಕೆಲಗಳಲ್ಲಿ ಜನವೊ ಜನ. ಉರಿವ ಸೂರ್ಯ, ಹಾಡೊ ಹಕ್ಕಿ, ಪ್ರಕೃತಿಯ ಸೊಬಗು, ವಾತವರಣದಲ್ಲಿ ಏನು ಬದಲಾಗದೆ ಇದ್ದರು ಕ್ಯಾಲೆಂಡರ್ ನಲ್ಲಿ ಬದಲಾದ ವಾರ ಬಾನುವಾರ ಅಷ್ಟೇ. ಬಾನುವಾರ ಬಂತು ಅಂದ್ರೆ , ಕೂಲಿ ಕಾರ್ಮಿಕರಿಂದ ಹಣವಂತರವರೆಗು ಕಾಣಸಿಗುವ ಒಂದು ಸ್ಥಳ ಸಂತೆ. ನಾನು ಬೆಳಗ್ಗೆ ಎದ್ದು ಕೈಲೊಂದು ಬ್ಯಾಗ್ ಹಿಡಿದು ಅಪ್ಪನ ಹಳೆ ಬೈಕ್ ಹಿಡಕೊಂಡು ಸಂತೆಕಡೆ ಹೋಗಿದೆ. ಅಗಷ್ಟೆ ಸೂರ್ಯನ ತಾಪ ಮೈ ಕೈ ಸೋಕಿಸಿ ,ಉರಿವ ಬಿಸಿಲಿಗೆ ಸ್ವಲ್ಪ ಶಾಪ ಹಾಕತ, ತಣ್ಣಗೊಂದು ಮಳೆ ಬರಬರಬಾರದ ಅಂತ ಮನಸ್ಸಿನಲ್ಲಿ ಅಂದಕೊಳ್ಳತ ಬಾನುವಾರ ಸಂತೆಕಡೆ ಹೊರಟಿದ್ದೆ ಬಿಡುವಿಲ್ಲದೆ ಓಡಾಡುವ ವಾಹನಗಳು ಅದ್ದರಿಂದ ಬರುವ ಹಾರನ್ ಶಬ್ದ, ದೂಳು , ಪ್ರತಿನಿತ್ಯ ಇರುವ ಹಾಗೆ ಇರುವ ಬಟ್ಟೆಅಂಗಡಿಗಳು, ಹೊಟೇಲ್ ಗಳು,

ಸುಂದರವಾಗಿ ನಿರ್ಮಿತವಾದ ಬಸ್ ಸ್ಟಾಂಡ್ ಒಂದಷ್ಟು ಜನ ಬಸ್ಸುಗಳಗೆ ಹೋಗುವ ಅವಸರ ಇನ್ನೆಲೊ ತಲುಪುವ ಸಡಗರ, ಇನ್ಯಾರದು ಹಳೆ ಸ್ನೇಹಿತ ಸಿಕ್ಕಿ “ಹೇಗಿದ್ದಿರ ಎಷ್ಟು ಸಮಯ ಆಯ್ತ ನಿಮ್ಮ ನೋಡಿ ಏನ್ ಕೆಲಸ ” ಅನೊ ಮೃದುವಾದ ಮಾತುಗಳು ನೊಡತ , ಅದ್ಯಕೊ ಪೋಲಿಸ್ ಜೀಪ್ ಕಾಣಸಿ ಅಯ್ಯೋ ಹೆಲ್ಮೆಟು ಮನೆಲ್ಲೆ ಬಿಟ್ಟು ಬಂದುಬಿಟ್ಟಿದಿನಲ್ಲ ಎಲದ್ರು ಕೇಸ್ ಹಾಕತಿದ್ದರ, ಅನೊ ಆತುರದಲ್ಲೆ ಕುತ್ತಗೆ ಹೊರಳಿಸಿ ನೊಡತ ಮುಂದೆ ಸಾಗಿಬಿಟ್ಟೆ. ಸದ್ಯ ಪೋಲಿಸ್ ಕೇಸ್ ಹಾಕತಿರಲಿಲ್ಲ. ಸಣ್ಣ ಬಾಳಹೊನ್ನೂರು ಬೆಂಗಳೂರು ಆಗಿರೊದ ನೋಡಿ ನಿಬ್ಬೆರಾಗಗಿ ನೋಡತಿದ್ರು ಅಷ್ಟೇ. ಕೈಲೊಂದು ಬ್ಯಾಗ್ ಹಿಡದು ಸಂತೆ ಒಳಗೆ ಪ್ರವೇಶ ಮಾಡತಿದ್ದಂಗೆ, ಸಂತೆ ಯೊಳಗೆ ಕಾಲು ಇಡಲು ಸಾಧ್ಯವಾಗದಷ್ಟು ಜನ, ಹೊಸ ಬಾಷೆ, ಹೊಸ ಮುಖಗಳು, ಇವರೆಲ್ಲರೂ ಯಾವ ಊರು, ಉಡುಪುಗಳ ವೈವಿದ್ಯತೆ ಇದೆಲ್ಲವೂ ನೋಡುತ ಹಾಗೆ ಮುಂದೆ ಸಾಗಿದೆ. ಅಲ್ಲೊಂದು ಅಷ್ಟು ಜನ ತರಕಾರಿಯವನ್ನ ಬಳಿ ಕೇವಲ ಹತ್ತು ರೂಪಯಿಗೆ ಚರ್ಚೆ ಮಾಡಿ. ಜಗಳವಾಡುತ್ತ,ಇನ್ನೊಂದಷ್ಟು ಮಂದಿ ಏನ್ ತಗಳಬಹುದು ಅನ್ನುವ ಅಲೋಚನೆ ಮಾಡತ, ಅದೆ ಮೆಟ್ಟಿಲ ಕಲ್ಲು ಗಳ ಮೇಲೆ ಕುಳಿತ ಕೆಲವೊಂದು ವ್ಯಕ್ತಿಗಳ ಮನಸ್ಸಿನಲ್ಲಿ ಅದ್ಯವದೊ ಅಲೋಚನೆಗಳತ್ತ ವಾಲುತ, ಬನ್ನಿ ಬನ್ನಿ ತರಕಾರಿ ತರಕಾರಿ ಅಂತ ಕುಗುವ ಶಬ್ದ ಕಿವಿಗೆ ಅಪ್ಪಳಿಸುತ್ತ, ಮುಂದೆ ಹೆಜ್ಜೆ ಹಾಕುತ ಹೋದೆ. ನನ್ನ ಮನಸ್ಸಿಗೆ ಬಂದ ಒಂದೆ ಪ್ರಶ್ನೆ ನಾಳೆ ನಮ್ಮ ಬದಕು ಹೇಗೊ ಎನೊ,ಆಯಸ್ಸು ಭಗವಂತನ ನಿರ್ಧಾರ.. ಆದರು ಬದಕಲೆಬೇಕದ ಅನಿವಾರ್ಯ ಎಷ್ಟಿದೆ ಅಲ್ವಾ. ಬಾಷೆಯೆ ಗೊತ್ತಿಲ್ಲದ ಊರುಗಳಲ್ಲಿ ಬದಕಬೇಕು ,ಹಸಿವಿನ ಹೊಟ್ಟೆ ಗೆ ಎಷ್ಟೊಂದು ಹೊರಾಟ .ಇದ್ಯಲವು ನನ್ನ ಅಲೋಚನೆಗಳಿಗು ಪದಗಳಿಗು ಮೀರಿದು ಎಂದು ತಿಳಿಯಿತು.

ಅಮ್ಮ ಹೇಳಿದ ತರಕಾರಿ ಚೀಲದೊಳಗೆ ತುಂಬಿ ಅಲ್ಲಿಂದ ಹೊರಟೆ, ಒಂದಷ್ಟು ಚೌಕಸಿಗಳ ನೋಡುತ ಹೊರ ಬರುವಾಗ ತಿನ್ನುವ ಅನ್ನಕೆ ಚೌಕಸಿ ಮಾಡುವ ವ್ಯಕ್ತಿಗಳು ಆಡಂಬರದ ಬಂಗರಕ್ಕೆ ,ಮಾಡದಿರುವುದು ನೋಡಿದಾಗ ಬೆವರ ಹನಿಯ ಸಾಮಥ್ರ್ಯ ಕಮ್ಮಿ ಆಗುತಿದ್ದೆ ಎನಿಸದೆ ಇರಲಾರದು ಅಲ್ವಾ. ಅದಗಲೆ ಬಿಸಲಿಗೆ ಕಾಂಕ್ರೀಟ್ ರೋಡುಗಳ ಬಿಸಿ ಮುಖಕ್ಕೆ ಅಪ್ಪಳಿಸುತ್ತಿತು ಬೈಕ್ ಹತ್ತಿ ಮನೆ ಕಡೆಬರುವಾಗ, ಬಾಳೆಹೊನ್ನೂರಿನಿಂದ ಸಿಗೋಡಿನ ವರೆಗೆ ರಸ್ತೆಗಳು ಅಭಿವೃದ್ಧಿ ಜೊರಾಗಿಯೇ ನಡೆಯುತ್ತಿತ್ತು ಬಹಳ ವರ್ಷಗಳಕಾಲ ನೆರಳು ನೀಡುತ್ತಿದ ಮರಗಳು ಮನುಷ್ಯ ನ ಅಭಿವೃದ್ಧಿಯ ಹೆಸರಲ್ಲಿ ನೆರಕುರುಳಿ ಜೀವ ಬಿಟ್ಟು ತುಂಡಗಿರುವ ನೆನೆದು ಮನಸ್ಸಿನೊಳಗೆ ಬೆಸರ ಇಮ್ಮುಡಿಆಯಿತು. ಇಷ್ಟೆಲ್ಲಾ ಯೋಚಸಿತ್ತ ಸಮಯ ನೋಡಿದೆ ಗಂಟೆ ,ಹನ್ನೆರಡು ಆಗಿತ್ತು ಅಯ್ಯೋ ಅಮ್ಮ ಇನ್ನಷ್ಟೊತ್ತಗೆ ಮೀನು ಸಾರು ಮಾಡೊದು ನಾನು ಊಟ ಮಾಡೊದು ಯಾವಗ ಅಂತ ,ವೇಗವಾಗಿ ಮನೆ ಸೇರಿದೆ.ಮನುಷ್ಯನ ಬದಕು ಹೇಗೆ ಅಂದರೆ ಇಲ್ಲಿ ಎಲವು ಪಡೆಯವುವ ಹಂಬಲದಲ್ಲಿ ಇನ್ನೆನೊ ಕಳೆದುಕೊಂಡಿರತನೆ.ಅದು ಎಲ್ಲವೂ ಸಿಗುವ ಸಮಯಕ್ಕೆ ಸಮಯವನ್ನೆ ಕಳೆದುಕೊಂಡಿರತನೆ. ಬಾನುವಾರದ ಸಡಗರ ಕಣ್ಮುಂದೆ ನೈಜತೆ ಯೊಂದಿಗೆ ಬರವಣಿಗೆಯ ಮೂಲಕತಂದೆ.ನಿಮ್ಮ✍️ಕಾರ್ತಿಕ್ ಕಾರ್ ಗದ್ದೆ
Leave a Reply