Advertisement

ಕೆ.ಪಿ.ಎಸ್ ಪ್ರೌಢಶಾಲೆ ಎಸ್.ಎಸ್.ಎಲ್.ಸಿ ಗುಣಾತ್ಮಕ ಫಲಿತಾಂಶ ಪಡೆಯಲು ಶಿಕ್ಷಕರ ಪಡೆ ಪಣ.

ಕ್ರಿಯಾಶೀಲ ಶಿಕ್ಷಕರ ಪಡೆ ಹಾಗೂ ಆಡಳಿತ ಮಂಡಳಿ ಇವೆರಡು ಜೋಡೆತ್ತು ಗಳಂತೆ ಕಾರ್ಯ ರೂಪಿಸಿದರೆ ಅದನ್ನು ಗಮನಿಸುವ ನೂರಾರು ಕಣ್ಣುಗಳು ಆ ತಂಡವನ್ನು ಪ್ರಶಂಸೆ ಮಾಡುವುದರೊಂದಿಗೆ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಕೊಂಡಾಡುತ್ತಾರೆ ಎಂಬುದಕ್ಕೆ ತಾಜಾ ಉದಾಹರಣೆ ಕೊಪ್ಪ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್.ಹೌದು ಈ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ರಾಘವೇಂದ್ರ ಅವರು ಪ್ರಸ್ತುತ ಕೊಪ್ಪ ತಾಲ್ಲೂಕಿನ ಪ್ರಭಾರಿ ಕ್ಷೇತ್ರಶಿಕ್ಷಣಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದು ಇವರ ಮಾರ್ಗದರ್ಶನದಲ್ಲಿ 21 ಶಿಕ್ಷಕರ ತಂಡ ಈ ಬಾರಿ 100% ಫಲಿತಾಂಶ ಬರಬೇಕೆಂದು ಅನೇಕ ರೀತಿಯ ಕಸರತ್ತು ಸುಮಾರು ನಾಲ್ಕು ತಿಂಗಳಿಂದ ಅಲ್ಲಿನ ಶಿಕ್ಷಕ ಪಡೆ ಶ್ರಮಿಸುತ್ತಿದೆ. ಉಪಪ್ರಾಂಶುಪಾಲರಾದ ರಾಘವೇಂದ್ರ ಅವರು ಈ ಹಿಂದೆ ಶೃಂಗೇರಿಯ ಬಿ.ಇ.ಓ. ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇದೇ ತಂತ್ರವನ್ನು ರೂಪಿಸುವ ಮೂಲಕ ಶೃಂಗೇರಿ ತಾಲೂಕಿನ ಫಲಿತಾಂಶ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿತ್ತು. ಹಲವು ಕಾರ್ಯತಂತ್ರಗಳನ್ನು ಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲೆಯಲ್ಲಿ 2024-25ನೇ ಸಾಲಿನ ಅತ್ಯುತ್ತಮ ಗುಣಾತ್ಮಕ SSLC ಫಲಿತಾಂಶ ಪಡೆಯಲು ಅಳವಡಿಸಿಕೊಳ್ಳಲಾಗಿದೆ. ಈ ವರ್ಷ ಈ ಶಾಲೆಯ 135 ವಿದ್ಯಾರ್ಥಿಗಳು SSLC ಪರೀಕ್ಷೆಗೆ ಹಾಜರಾಗುತ್ತಿದ್ದು ಎಲ್ಲಾ ವಿದ್ಯಾರ್ಥಿಗಳೂ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗುವಂತೆ ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ವಿಶೇಷ ತರಗತಿಗಳು: ಪ್ರತಿ ದಿನ ಬೆಳಿಗ್ಗೆ ಶಾಲಾ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ. ಡಿಸೆಂಬರ್ ತಿಂಗಳ ಆರಂಭದಿಂದ ಎಲ್ಲಾ ವಿದ್ಯಾರ್ಥಿಗಳನ್ನು 6 ಗುಂಪುಗಳಾಗಿ ಮಾಡಿ ಎಲ್ಲಾ ವಿಷಯ ಶಿಕ್ಷಕರು ಸಂಜೆ 6-00ಗಂಟೆಯ ವರೆಗೆ ವಿಶೇಷ ಮಾರ್ಗದರ್ಶನ ನೀಡುತ್ತಿರುತ್ತಾರೆ. ಜನವರಿ ತಿಂಗಳ ಆರಂಭದಿಂದ ಶಾಲೆಯ ಎಲ್ಲಾ ಗಂಡು ಮಕ್ಕಳಿಗೆ ರಾತ್ರಿ 8-00 ಗಂಟೆಯವರೆಗೆ ವಿಷಯ ಶಿಕ್ಷಕರ ಮಾರ್ಗದರ್ಶನದಲ್ಲಿ ಅಧ್ಯಯನ ತರಗತಿಗಳನ್ನು ನಡೆಸಲಾಗುತ್ತಿದೆ

ವಿಶೇಷ ತರಗತಿಗಳು

ಅಧ್ಯಯನ ವೇಳಾಪಟ್ಟಿ

ವಿದ್ಯಾರ್ಥಿಗಳಿಗೆ ದಿನದ 24 ಗಂಟೆಯ ಸದ್ಬಳಕೆ ಮಾಡಿಕೊಳ್ಳಲು ಪೂರಕವಾಗಿ ಅಧ್ಯಯನ ವೇಳಾಪಟ್ಟಿಯನ್ನು ನೀಡಲಾಗಿದೆ. ಈ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳ ಅನುಸರಿಸುತ್ತಿರುವ ಬಗ್ಗೆ ನಿರಂತರ ಅನುಸರಣೆ ಮಾಡಲಾಗುತ್ತಿದೆ.*ಶಿಕ್ಷಕರಿಗೆ ದತ್ತು:-* ವಿದ್ಯಾರ್ಥಿಗಳನ್ನು 18 ಗುಂಪುಗಳಾಗಿ ವಿಂಗಡಿಸಿ 18 ಶಿಕ್ಷಕರಿಗೆ ದತ್ತು ನೀಡಿ ವಿದ್ಯಾರ್ಥಿಗಳ ಕಲಿಕೆಗೆ ಮಾರ್ಗದರ್ಶನ ಮಾಡಿಸಲಾಗುತ್ತಿದೆ. ರಾತ್ರಿ ಮಲಗುವ ಮತ್ತು ಬೆಳಿಗ್ಗೆ ಏಳುವ ಸಮಯವನ್ನು ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಮಿಸ್ಡ್ ಕಾಲ್ ಮೂಲಕ ಖಾತ್ರಿಪಡಿಸಬೇಕಾಗಿರುತ್ತದೆ.**ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ:-* ಶಿಕ್ಷಕರು ತಂಡಗಳಲ್ಲಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಅವರ ಸಂಪೂರ್ಣ ಹಿನ್ನಲೆಯನ್ನು ಹಾಗೂ ಸಮಸ್ಯೆಗಳನ್ನು ಅರ್ಥೈಸಿಕೊಂಡು ವೈಯಕ್ತಿಕ ಮಾರ್ಗದರ್ಶನ ಮಾಡಲು ನಿಯಮಿತವಾಗಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡುತ್ತಿರುತ್ತಾರೆ. **ನಿರಂತರ ಹಾಜರಾತಿ:-* ಗೈರು ಹಾಜರಾಗುವ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಗೈರು ಹಾಜರಿಗೆ ಕಾರಣಗಳನ್ನು ತಿಳಿದುಕೊಂಡು ನಿರಾಸಕ್ತಿ ತೋರುವ ಮಕ್ಕಳನ್ನು ಮನವೊಲಿಸಿ ಶಿಕ್ಷಕರ ವಾಹನಗಳಲ್ಲೇ ಶಾಲೆಗೆ ಕರೆದುಕೊಂಡು ಬರಲಾಗುತ್ತಿದೆ. **ಪೋಷಕರ ಸಭೆಗಳು:-* ನಿಯಮಿತವಾಗಿ ಪೋಷಕರ ಸಭೆಗಳನ್ನು ನಡೆಸಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಲಾಗುತ್ತಿದೆ. *ಪಾಸಿಂಗ್ ಪ್ಯಾಕೇಜ್ ಮತ್ತು ಸ್ಕೋರಿಂಗ್ ಪ್ಯಾಕೇಜ್ :-* ವಿದ್ಯಾರ್ಥಿಗಳ ಕಲಿಕೆಯನ್ನು ಆಧರಿಸಿ ಉತ್ತೀರ್ಣರಾಗಲು ಪಾಸಿಂಗ್ ಪ್ಯಾಕೇಜ್ ಹಾಗೂ ಹೆಚ್ಚು ಅಂಕಗಳನ್ನು ಗಳಿಸಲುಅನುಕೂಲವಾಗುವಂತೆ ಸ್ಕೋರಿಂಗ್ ಪ್ಯಾಕೇಜ್ ಗಳನ್ನು ಮಾಡಿಕೊಂಡು ಕಲಿಸಲಾಗುತ್ತಿದೆ *.ಪರೀಕ್ಷಾ ದಿನಗಳ ಅಧ್ಯಯನ:-* ನಿಗಧಿತ ವೇಳಾಪಟ್ಟಿಯಂತೆ ಈ ವರ್ಷದ SSLC ಪರೀಕ್ಷೆಯು ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಯುತ್ತಿದ್ದು ಪರೀಕ್ಷೆ ನಡೆದ ದಿನಗಳಂದು ಪರೀಕ್ಷೆ ಮುಗಿದ ಕೂಡಲೇ ಶಾಲೆಯಲ್ಲಿಯೇ ಊಟದ ವ್ಯವಸ್ಥೆ ಮಾಡಿ ಆ ದಿನ ಸಂಜೆಯವರೆಗೆ ಮುಂದಿನ ಪರೀಕ್ಷೆಯ ವಿಷಯವನ್ನು ಶಿಕ್ಷಕರ ಮಾರ್ಗದರ್ಶನದೊಂದಿಗೆ ಅಧ್ಯಯನ ಮಾಡಿಸಲಾಗುತ್ತಿದೆ. ಪರೀಕ್ಷಾ ಬಿಡುವಿನ ಎಲ್ಲಾ ದಿನಗಳಲ್ಲೂ ವಿದ್ಯಾರ್ಥಿಗಳು ಶಾಲೆಯಲ್ಲಿ ಆಯಾ ವಿಷಯ ಶಿಕ್ಷಕರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುವಂತೆ ಮಾಡಲಾಗಿದೆ.ಉಪ ಪ್ರಾಂಶುಪಾಲರಾದ ರಾಘವೇಂದ್ರ ಅವರ ತಂಡದಲ್ಲಿ ಶ್ರಮಿಸಿದ ಶಿಕ್ಷಕರ ಪಡೆ ಅಂಬುಜಾ. ಜಿ.ಗಣಿತ ಶಿಕ್ಷಕರು,ಶೋಭ ವಿಜ್ಞಾನ ಶಿಕ್ಷಕರು,ಯತಿರಾಜ್ ಇಂಗ್ಲಿಷ್ ಶಿಕ್ಷಕರು,ಪಾಲಾಕ್ಷ ಟಿ. ಎಸ್.ವಿಜ್ಞಾನ ಶಿಕ್ಷಕರು,ವೆಂಕಟೇಶ್ ಗಣಿತ ಶಿಕ್ಷಕರು, ವಿಶ್ವನಾಥ್ ಹೋಬಳಿದಾರ್ ಗಣಿತ ಶಿಕ್ಷಕರು,ಸುಮಾ ಬಿ.ಎನ್. ಸಮಾಜ ವಿಜ್ಞಾನ ಶಿಕ್ಷಕರು,ರಮ್ಯ ಶೆಟ್ಟಿ, ಗಣಿತ ಶಿಕ್ಷಕರು, ತರನಮ್ ಫಾತಿಮಾ ಹಿಂದಿ ಶಿಕ್ಷಕರು, ಲೋಹಿತಾಶ್ವ ಎಸ್.ಎಂ.ದೈಹಿಕ ಶಿಕ್ಷಣ ಶಿಕ್ಷಕರು, ನಟರಾಜ್ ಸಂಗೀತ ಶಿಕ್ಷಕರು, ಸವಿತ ನಾಟಕ ಶಿಕ್ಷಕರು,ಅನಂತ್ ಹೆಬ್ಬಾರ್ ಸಂಸ್ಕೃತ ಶಿಕ್ಷಕರು, ಗಿರೀಶ್ ಇಂಗ್ಲಿಷ್ ಶಿಕ್ಷಕರು,ನಾಗವೇಣಿ ಕನ್ನಡ ಶಿಕ್ಷಕರು, ಉಷಾ ಕನ್ನಡ ಶಿಕ್ಷಕರು,ಪುಷ್ಪಲತಾ ಸಮಾಜ ವಿಜ್ಞಾನ ಶಿಕ್ಷಕರು,ಚೇತನ್ NSQF ಶಿಕ್ಷಕರು, ಅಂಕಿತಾ NSQF ಶಿಕ್ಷಕರು, ದಿವ್ಯ ಸಮಾಜ ವಿಜ್ಞಾನ ಶಿಕ್ಷಕರು, ಐನಾಜ್ ಹಿಂದಿ ಶಿಕ್ಷಕರು ಹಗಲಿರುಳು ಶ್ರಮಿಸಿದ್ದು ಇವರುಗಳ ನಿರೀಕ್ಷೆ ಯಂತೆ ಈ ಬಾರಿ ಕರ್ನಾಟಕ ರಾಜ್ಯ ಗುರುತಿಸುವ ಫಲಿತಾಂಶ ಬರಲಿ ಎಂದುದು ನಮ್ಮೂರ ವಾರ್ತೆ ಪತ್ರಿಕಾ ಬಳಗದ ಆಶಯವಾಗಿದೆ.

Leave a Reply

Your email address will not be published. Required fields are marked *