Advertisement

ಶೃಂಗೇರಿ ಕ್ಷೇತ್ರಾದ್ಯಂತ ಸುಧಾಕರ್ ಶೆಟ್ಟಿ ಹವಾ

  • ಶೃಂಗೇರಿ ಕ್ಷೇತ್ರಾದ್ಯಂತ ಸುಧಾಕರ್ ಶೆಟ್ಟಿ ಹವಾ.
  • ಬಲವಾದ ಪಕ್ಷ ಸಂಘಟನೆಯತ್ತ ಜೆಡಿಎಸ್!.

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಹಾಗೂ ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಸುಧಾಕರ್ ಶೆಟ್ಟಿಯವರು ಬಲವಾದ ಪಕ್ಷ ಸಂಘಟನೆಗೆ ಪ್ರಬಲವಾದ ಹೆಜ್ಜೆಟ್ಟಂತಿದೆ. ಸೋತ ದಿನದಿಂದಲು ಕ್ಷೇತ್ರವನ್ನು ಬಿಡದೆ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಾನು ಸೋತರೂ ಕ್ಷೇತ್ರದ ಜನರೊಂದಿಗೆ ಇರುತ್ತೇನೆ ಎಂಬ ಭರವಸೆಯ ಮಾತನ್ನು ಉಳಿಸಿಕೊಂಡಿದ್ದಾರೆ ಎಂಬ ಮಾತನ್ನು ಕ್ಷೇತ್ರದ ಜನತೆ ಈಗ ಮಾತನಾಡತೊಡಗಿದ್ದಾರೆ.

ಮೈಸೂರಿನಲ್ಲಿ ಬಹುದೊಡ್ಡ ಉದ್ಯಮಿಯಾಗಿರುವ ಇವರು ತಮ್ಮ ಉದ್ಯಮವನ್ನು ನಡೆಸುವುದರೊಂದಿಗೆ ಕ್ಷೇತ್ರದ ಜನಸಾಮಾನ್ಯರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ. ತಮ್ಮ ತಾಯಿಯ ಹೆಸರಿನಲ್ಲಿ ಅಮ್ಮ ಫೌಂಡೇಶನ್ ಮುಖೇನ ಹಲವು ನೊಂದ ಜೀವಗಳಿಗೆ, ವಿದ್ಯಾರ್ಥಿಗಳಿಗೆ ನೆರವನ್ನು ನೀಡುತ್ತಿದ್ದು ಕೇವಲ ಹೆಸರಿಗಷ್ಟೇ ಅಮ್ಮನ ಹೆಸರಿನಲ್ಲಿ ಫೌಂಡೇಶನ್ ಸ್ಥಾಪಿಸದೆ ತಾಯಿಯ ಹೃದಯವನ್ನು ಮೈಗೂಡಿಸಿಕೊಂಡಿದ್ದು ನೊಂದವರ ಕಷ್ಟಕ್ಕೆ ಮಿಡಿಯುವುದು ಇವರ ಹುಟ್ಟುಗುಣ ಎಂಬುದನ್ನು ಆಗಾಗ್ಗೆ ಸಾಬೀತು ಮಾಡುತ್ತಿರುತ್ತಾರೆ. ಕಳೆದ ಚುನಾವಣೆಯಲ್ಲಿ ಬಾರಿ ದೊಡ್ಡ ಸಂಚಲನವನ್ನು ಕ್ಷೇತ್ರದಲ್ಲಿ ಬೀರಿದ್ದ ಸುಧಾಕರ್ ಶೆಟ್ಟಿಯವರು ವಿಶ್ವಾಸದ್ರೋಹಿಗಳನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ ನಂಬಿಕಸ್ತ ಪಡೆಯನ್ನು ಕಟ್ಟಿಕೊಳ್ಳುವಲ್ಲಿ ಬಹಳ ಎಚ್ಚರಿಕೆ ಹೆಜ್ಜೆಯನ್ನು ಇಡುತ್ತಿದ್ದು ಮುಂಬರುವ ಚುನಾವಣೆಗೆ ಭದ್ರಬುನಾದಿಯನ್ನು ಈಗಿನಿಂದಲೇ ಹಾಕಿ ಕೊಳ್ಳುತ್ತಿದ್ದಾರೆ.

ಕ್ಷೇತ್ರದ ಕುಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಕುಂದು ಕೊರತೆಗಳನ್ನು ಆಲಿಸುವ ಮೂಲಕ ಕ್ಷೇತ್ರದ ಸಮಗ್ರ ಚಿತ್ರಣವನ್ನು ತಾವೇ ಹತ್ತಿರದಿಂದ ಗಮನಿಸಿದ ಕಾರಣ ಉದ್ಯೋಗ ಸೃಷ್ಟಿ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೂ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೂ ಮುಂದಾಗಿದ್ದಾರೆ. ಎಫ್.ಕೆ.ಸಿ.ಸಿ.ಐ ನ ಮಾಜಿ ಅಧ್ಯಕ್ಷರಾಗಿರುವ ಇವರಿಗೆ ಉದ್ಯೋಗವನ್ನು ಸೃಷ್ಟಿಸುವ ಹಲವು ಮಜಲುಗಳನ್ನು ಬಲ್ಲವರಾಗಿದ್ದಾರೆ. ಕ್ಷೇತ್ರದಲ್ಲೂ ಸಹ ಜನಸಾಮಾನ್ಯರ ಬಾಯಲ್ಲಿ ಇವರೊಬ್ಬ ಇಚ್ಛಾ ಶಕ್ತಿಯುಳ್ಳ ಜನನಾಯಕ ಎಂಬ ಮಾತು ಹರಿದಾಡುತ್ತಿದ್ದು ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಸುಧಾಕರ್ ಶೆಟ್ಟಿ ಅವರಿಗೆ ಆಶೀರ್ವಾದ ಮಾಡಿದ್ದೆ ಆದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಉದ್ಯೋಗ ಕ್ರಾಂತಿಯಾಗುವುದರಲ್ಲಿ ಆಶ್ಚರ್ಯವಿಲ್ಲ ಎಂಬುದು ಕ್ಷೇತ್ರದಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಸುದ್ದಿ.

Leave a Reply

Your email address will not be published. Required fields are marked *