
ಜರ್ಮನಿಯ *ನಮ್ಮ ಕನ್ನಡ ಶಾಲೆಯ* ನೇತೃತ್ವದಲ್ಲಿ ಜರ್ಮನಿ, ಬೆಲ್ಜಿಯಂ ಹಾಗೂ ಎರ್ಲಾಂಗನ್ ಅಲ್ಲಿ ಕನ್ನಡ ಕಲಿಸುತ್ತಿರುವ ಶಿಕ್ಷಕ ಬಂಧುಗಳಿಗೆ ಸುಮಾರು ಮೂರು ಗಂಟೆಗಳ ಕಾಲ ಆನ್ ಲೈನ್ ತರಬೇತಿ ನೀಡಲಾಯಿತು. ನಲಿಕಲಿ ವಿಧಾನದಲ್ಲಿ ಕನ್ನಡ ವರ್ಣಮಾಲೆಯ ಕಲಿಕೆ, ಗುಣಿತಾಕ್ಷರ, ಒತ್ತಕ್ಷರ ಪರಿಚಯ, ಪದಗಳ ರಚನೆ, ಸರಳ ವಾಕ್ಯ ರಚನೆ, ಭಾಷಾ ಸಂವಹನದ ಬಗ್ಗೆ ಅಲ್ಲಿನ ಶಿಕ್ಷಕರುಗಳಿಗೆ ತರಬೇತಿ ನೀಡಲಾಯಿತು. ಅಲ್ಲಿನ ಶಿಕ್ಷಕರುಗಳ ಆಸಕ್ತಿ, ಬದ್ಧತೆ, ಕುತೂಹಲ, ಕನ್ನಡ ಕಲಿಸಬೇಕೆಂಬ ತುಡಿತ, ವಿದೇಶಗಳಲ್ಲಿ ಕನ್ನಡ ಉಳಿಸಿ ಬೆಳೆಸಬೇಕೆಂಬ ಹಂಬಲ ಅಬ್ಬಾ! ಎನ್ನುವಂತದ್ದು.

ಪ್ರತಿ ಸಲದಂತೆ ಈ ಸಲವೂ ಲೋಕನಾಥಪುರದ ಕನ್ನಡ ಭಾಷಾ ಶಿಕ್ಷಕರೂ, ಕರ್ನಾಟಕ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿಯ ಮುಖ್ಯಸ್ಥರೂ ಆದ ರವೀಂದ್ರ .ಆರ್.ಡಿ. ಅವರೊಂದಿಗೆ ಭದ್ರಾವತಿಯ ಅಣ್ಣಪ್ಪ ಮತ್ತು ಹಾಸನದ ರೇಣುಕಾರಾಧ್ಯ ಅವರೂ ಜೊತೆಗೂಡಿದ್ದು ಈ ಸಲದ ವಿಶೇಷ. ಇದರ ಜೊತೆಗೆ ಸಂಪನ್ಮೂಲ ವ್ಯಕ್ತಿಗಳಂತೆಯೇ ಭಾಗವಹಿಸಿ ಆಶೀರ್ವಾದ ರೂಪದಲ್ಲಿ ಕನ್ನಡ ಕಲಿಕೆಯ ಬಗ್ಗೆ ಅದ್ಭುತವಾಗಿ ಗುಲ್ಬರ್ಗದ ಶ್ರೀ ರಾಮಕೃಷ್ಣ ವಿವೇಕಾನಂದ ಸೇವಾಶ್ರಮದ ಪೂಜ್ಯ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯವರೂ ಭಾಗವಹಿಸಿ ಮಾತನಾಡಿದ್ದು ಮತ್ತೊಂದು ವಿಶೇಷ. ಇದಕ್ಕೆಲ್ಲ ಮೂಲ ಕಾರಣಕರ್ತರು ನಮ್ಮ ಕನ್ನಡ ಶಾಲೆಯ *ಡಾ. ರಶ್ಮಿ ನಾಗರಾಜ್* ಮತ್ತು ಅವರ ಇಡೀ ತಂಡ. ವಿದೇಶದಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ನಮ್ಮ ಕನ್ನಡ ಶಾಲೆಯ ತಂಡದ ಶ್ರಮ ಅಭಿನಂದನೀಯ.

Leave a Reply