Advertisement

ಲೋಕನಾಥಪುರ ಪ್ರೌಢಶಾಲೆಯಲ್ಲಿ ಆರ್.ಡಿ ರವೀಂದ್ರರವರಿಗೆ ಸನ್ಮಾನ

ಕೊಪ್ಪ ತಾಲ್ಲೂಕು ಲೋಕನಾಥ ಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದಿಂದ ಉತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪಡೆದ ಇಲ್ಲಿನ ಭಾಷಾ ಶಿಕ್ಷಕ ಆರ್.ಡಿ.ರವೀಂದ್ರ ಇವರನ್ನು ಅವರ ಶಿಷ್ಯಂದಿರು ಅದ್ದೂರಿಯಾಗಿ, ಆತ್ಮೀಯವಾಗಿ, ಪ್ರೀತಿಯಿಂದ ಶಾಲೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಆರ್.ಡಿ.ರವೀಂದ್ರ ಇವರು *”ಇತರೆಲ್ಲ ಸನ್ಮಾನಗಳಿಗೆ ಕಳಶಪ್ರಾಯದಂತೆ ನಮ್ಮ ಪ್ರೀತಿಯ ಮಕ್ಕಳು ಮಾಡಿದ ಈ ಸನ್ಮಾನ ಜೀವನದಲ್ಲಿ ಎಂದೂ ಮೃಯಲಾರದಂತಹದ್ದು.

ಮಕ್ಕಳ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ”* ಎಂದರು. ಸನ್ಮಾನಿಸಿ ಮಾತನಾಡಿದ ವಿದ್ಯಾರ್ಥಿ ಪ್ರತಿನಿಧಿ ಸಾನಿಕ *”ನಮ್ಮ ಗುರುಗಳಿಗೆ ನಾವೆಲ್ಲ ಸೇರಿ ಎಂದೋ ಸನ್ಮಾನಿಸಬೇಕೆಂದು ಕೊಂಡಿದ್ದೆವು. ಅದಕ್ಕೆ ಇಂದು ಕಾಲ ಕೂಡಿ ಬಂದಿದೆ. ನಮ್ಮ ಕನ್ನಡ ಶಿಕ್ಷಕರು ಸದಾ ನಮಗೆಲ್ಲ ಮಾದರಿ, ಪ್ರೇರಣೆ. ಒಂದು ಪುಟ್ಟ ಹಳ್ಳಿಯ ಬಡ ಕುಟುಂಬದಿಂದ ಬಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಮ್ಮ ಸರ್ ನಮಗೆ ಹೆಮ್ಮೆ. ಮುಂದೆ ನಾವೆಲ್ಲ ಅವರಂತೆ ಆಗುತ್ತೇವೆ ಎಂಬ ಪ್ರತಿಜ್ಞೆ ಮಾಡುತ್ತಿದ್ದೇವೆ”* ಎಂದರು. ಸಭೆಯಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀ ರಮೇಶ್, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಪದ್ಮನಾಭ್ ಹಾಗೂ ಎಲ್ಲ ಶಿಕ್ಷಕರೂ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಆಕಸ್ಮಿಕವಾಗಿ ಶಾಲೆಗೆ ಭೇಟಿ ನೀಡಿದ ಚಿಕ್ಕಮಗಳೂರು ಡಯಟ್

ಪ್ರಾಂಶುಪಾಲರಾದ ಶ್ರೀಮತಿ ಸುನೀತಾ ಹಾಗೂ ಉಪನ್ಯಾಸಕರಾದ ಶ್ರೀ ಶಿವಕುಮಾರ್, ಶ್ರೀ ಮಂಜಾ ನಾಯಕ್, ಡಿ.ವೈ.ಪಿ.ಸಿ. ಶ್ರೀ ರುದ್ರೇಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದಿಸಿ ಮಾತನಾಡಿದರು. ಜೊತೆಗೆ ಎಸ್.ಎಸ್.ಎಲ್ ಸಿ ಮಕ್ಕಳ ಜೊತೆ ಸಂವಾದ ನಡೆಸಿ ಪರೀಕ್ಷೆ ಎದುರಿದುವ ಬಗ್ಗೆ ಮಾರ್ಗದರ್ಶನ ನೀಡಿದರು. ಕೊನೆಯಲ್ಲಿ ಎಲ್ಲರಿಗೂ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರೆಲ್ಲರಿಗೂ ನೆನಪಿನ ಕಾಣಿಕೆ ನೀಡಿದ ಮಕ್ಕಳು ಶಾಲೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳ ಫೋಟೋಗಳನ್ನು ಕೊಡುಗೆಯಾಗಿ ನೀಡಿದರು. ಮಕ್ಕಳ ಈ ಕಾರ್ಯ ಎಲ್ಲರ ಮೆಚ್ಚುಗೆ ಗಳಿಸಿತು.

Leave a Reply

Your email address will not be published. Required fields are marked *