Advertisement

ನಮ್ಮೂರ ಎಕ್ಸ್ಪ್ರೆಸ್ ಅವರ ಮಲ್ನಾಡ್ ಐಕಾನ್ ಅವಾರ್ಡ್ ಕುರಿತು ಅಮ್ರಪಾಲಿ ಸುರೇಶ್ ಹೇಳಿಕೆ

ನಮ್ಮೂರ ಎಕ್ಸ್ಪ್ರೆಸ್ ಅವರ ಮಲ್ನಾಡ್ ಐಕಾನ್ ಅವಾರ್ಡ್ ಕುರಿತು ಅಮ್ರಪಾಲಿ ಸುರೇಶ್ ಹೇಳಿಕೆ

ತೀರ್ಥಹಳ್ಳಿ ಸುದ್ದಿ ಮಾಧ್ಯಮಕ್ಕೆ ನಿಮ್ಮ ಕೊಡುಗೆಯನ್ನು ಅಭಿನಂದಿಸುತ್ತೇನೆ. ಅನೇಕ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ನಾನು ನನ್ನ ಅನುಭವವನ್ನು ಹೇಳಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ತೀರ್ಥಹಳ್ಳಿ ವಿಧಾನ ಸಭಾಕ್ಷೇತ್ರದಲ್ಲಿ ರಾಜಕಾರಣಕ್ಕಾಗಿ ಸಾರ್ವಜನಿಕ ಜೀವನಕ್ಕಾಗಿ ಆಸ್ತಿ ಜಮೀನು ಮಾರಾಟ ಮಾಡಿದವರು ಇಬ್ಬರೇ ಅದು ನಮ್ಮ ನಾಯಕರಾದ ಕಿಮ್ಮನೆರತ್ನಾಕರ ಹಾಗು ಬಿಜೆಪಿಯ ಆರ್ ಮದನ್ ಮಾತ್ರ.ಅದಕ್ಕೂ ಹಿಂದೆ ಶಾಂತವೇರಿ ಗೋಪಾಲಗೌಡರು ತಮ್ಮ ಸರ್ವಸ್ವವನ್ನು ಸಮಾಜಕ್ಕಾಗಿ ತ್ಯಾಗಮಾಡಿದ್ದಾರೆ.

ನೀವು ಮಲ್ನಾಡ್ ಐಕಾನ್ ನೀಡುವಾಗ ವಾಸ್ತವ ಅರಿತು ನೀಡಬೇಕಿತ್ತು ಎಂಬುದು ನನ್ನ ವಯುಕ್ತಿಕ ಅಭಿಪ್ರಾಯ. ಕೊರೋನ ಸಮಯದಲ್ಲಿ ಅನೇಕರು ಈ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಕಿಮ್ಮನೆಯವರ ಒಂದೇ ಕರೆಗೆ ಅನೇಕ ಧಾನಿಗಳು ಲಕ್ಷಾಂತರ ಹಣ ದೇಣಿಗೆ ನೀಡಿದ್ದಾರೆ ಸಾವಿರಾರು ಕಿಟ್ ಹಂಚಿಕೆ ಮಾಡಿದ್ದೇವೆ ಆ ಸಮಯದಲ್ಲಿ ನಾನು ಮುಡುಬರಾಘವೇಂದ್ರ ಆದರ್ಶಹುಂಚದ ಕಟ್ಟೆ ಧಾನಿಗಳು ನೀಡಿದ ದೇಣಿಗೆಯಲ್ಲಿ ಕಿಟ್ ನೀಡಿದ್ದೇವೆ ಹೊರೆತು ವಯುಕ್ತಿಕ ಕಾಣಿಕೆ ಯಲ್ಲ ಎಂಬುದನ್ನು ಸ್ಪಷ್ಟ ಪಡೆಸುತಿದ್ದೇನೆ. ತೀರ್ಥಹಳ್ಳಿಯ ಪ್ರತಿಷ್ಠಿತ ಉದ್ಯಮಕ್ಕೆ ಒಂದುವರೆ ಲಕ್ಷ ಬಾಕಿ ಉಳಿಸಿಕೊಂಡು ಹೀರೋ ಆಗುವುದರಲ್ಲಿ ಯಾವ ಅರ್ಥ ಇದೆ.

ಕೊರೋನಾ ಸಮಯದಲ್ಲಿ ನಿಜವಾದ ವಾರಿಯರ್ ತರಹ ಪೂರ್ಣೇಶ್ ಕೆಳಕೆರೆ ಸುಬ್ಬುಕುಲಾಲ್ ಕುರುವಳ್ಳಿಯ ಪ್ರಮೋದ್ ಪೂಜಾರಿ ಹಾಗು ಇತರ ಯುವಕರು ಕೆಲಸ ಮಾಡಿದ್ದಾರೆ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ ಇಂತವರನ್ನು ಗುರುತಿಸ ಬೇಕಿತ್ತು ಎಂಬುದು ನನ್ನ ವಯುಕ್ತಿಕ ಅನಿಸಿಕೆ.ತೀರ್ಥಹಳ್ಳಿಯ ಗಾಂಧಿ ಭವನವು ಕೂಡ ಕಿಮ್ಮನೆಯವರ ಸಹೋದರ ನೀಡಿದ ಜಾಗದಲ್ಲಿ ಧಾನಿಗಳ ನೆರವಿನಿಂದ ನಿರ್ಮಾಣ ಮಾಡಲಾಗಿದ. ಯಾರಾದರು ಜಮೀನು ಮಾರಿ ಸಮಾಜ ಸೇವೆ ಮಾಡಿದ್ದು ಸಾಬೀತು ಪಡೆಸಿದ್ದಲ್ಲಿ ನನ್ನ ಎರಡು ಸೈಟ್ ಗಳನ್ನು ಸಮಾಜ ಸೇವೆಗೆ ನೀಡಲು ಸಿದ್ದನಾಗಿದ್ದೇನೆ ಪ್ರತಿಯೊಬ್ಬರೂ ಅವರ ಇತಿ ಮಿತಿ ಅರಿತರೆ ಅವರಿಗೂ ಕ್ಷೇಮ ಸಮಾಜಕ್ಕೂ ಕ್ಷೇಮ.ಪ್ರಚಾರ ಬಯಸದೇ ಕಿಮ್ಮನೆಯವರ ಕರೆಗೆ ದೇಣಿಗೆ ನೀಡಿದ ಎಲ್ಲಾ ಧಾನಿಗಳಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತಿದ್ದೇನೆ

ಅಮ್ರಪಾಲಿ ಸುರೇಶ್
ಜಿಲ್ಲಾ ಸಂಘಟನಾ ಕಾರ್ಯದರ್ಶಿ

Leave a Reply

Your email address will not be published. Required fields are marked *