
ವೈ.ಹೆಚ್. ಅಬ್ದುಲ್ ಹಮೀದ್ ರವರು ಹಸನಬ್ಬ ಹಾಗೂ ಬೀಬಿ ದಂಪತಿಗಳ ಸುಪುತ್ರರಾಗಿ 7-6-1960ರಲ್ಲಿ ಕೊಪ್ಪದ ಕಾಳಿದಾಸ ರಸ್ತೆ ಯಲ್ಲಿ ಜನಿಸಿದರು.ಇವರು ತಮ್ಮ ಶಿಕ್ಷಣವನ್ನು ಕೊಪ್ಪದಲ್ಲಿ ಪೂರೈಸಿ ತದನಂತರ ಕಟ್ಟಡ ಗುತ್ತಿಗೆದಾರರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸುತ್ತಾರೆ. ಜಿ.ಡಿ. ಪರಮೇಶ್ವರ್ ಗೌಡ್ರು ಹಾಗೂ ಅಜೀಲರ ಮುಂದಾಳತ್ವದಲ್ಲಿ ರಾಜಕೀಯ ಜೀವನವನ್ನು ಪ್ರಾರಂಭಿಸಿದ ತಾವು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ನಿರಂತರವಾಗಿ 5 ಬಾರಿ ಚುನಾಯಿತರಾಗಿ ಆಯ್ಕೆಯಾಗಿದ್ದಿರಿ.

ಒಂದು ಬಾರಿ ಅಧ್ಯಕ್ಷರಾಗಿ, ಒಂದು ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ತಮ್ಮ ಅವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜನಮನ್ನಣೆಗೆ ಪಾತ್ರರಾಗಿರುತ್ತೀರಿ. ತಮ್ಮ ವ್ಯಾಪ್ತಿಯಲ್ಲಿ ಬರುವ ಜನರ ಸುಖ ಕಷ್ಟಗಳಿಗೆ ಸಹಕಾರ ನೀಡುವ ನೀವು ಕೊರೋನಾ ಸಂದರ್ಭದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಮನೆ ಮನೆಗೆ ಕಿಟ್ ಹಚ್ಚುವ ಮೂಲಕ ಜನರ ಪ್ರೀತಿಗೆ ಹತ್ತಿರವಾದ ನೀವು ಬದ್ರಿಯಾ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತೀರಿ. ಸದ್ಯ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ತಾವು ಕಳೆದ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಾಧಿಸುವ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲೆ ತಮ್ಮನ್ನು ತಾವು ಗುರುತಿಸಿಕೊಂಡಿರಿ. ನಿಮ್ಮ ಈ ಸೇವೆಯನ್ನು ಗುರುತಿಸಿ ನಮ್ಮೂರ ವಾರ್ತೆ ಪತ್ರಿಕಾ ಬಳಗ ನಿಮ್ಮನ್ನು ಗೌರವಿಸಲು ಹೆಮ್ಮೆಯಾಗಿದೆ.

Leave a Reply